Belagavi

ಕೊಲೆಯಾದ ಸ್ಥಿತಿಯಲ್ಲಿ‌ ಬಾಲಕನ ಶವಪತ್ತೆ

Share

ಕೊಲೆಯಾದ ಸ್ಥಿತಿಯಲ್ಲಿ‌ ಬಾಲಕನ ಶವಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಹೊರವಲಯದ ಲಾಳ್ಯಾನಕೋಡಿ ಬಳಿ ಬಾವಿಯಲ್ಲಿ ನಡೆದಿದೆ.

ಪ್ರತಿದಿನ ಮನೆ ಮನೆ ತಿರುಗಿ ಕೂದಲು ತಗೆದುಕೊಂಡು ಜೀವನ ಸಾಗಿಸುತ್ತಿದ್ದ ಕಾಮಪ್ಪ ಕುಂಚಿಕೊರವ.ಮೃತ ಬಾಲಕ ಕಾಮಪ್ಪ ಎರಡು ದಿನಗಳ ಹಿಂದೆ ಸ್ನೇಹಿತನ ಜೊತೆ ಹಾರೂಗೇರಿಗೆ ಬಂದಿದ್ದ. ಹಾರೂಗೇರಿಯಲ್ಲಿ ಕೂದಲು ತುಂಬಿಕೊಳ್ಳುವ ವೇಳೆ ಸ್ಥಳೀಯ ಕೂದಲು ತುಂಬಿಕೊಳ್ಳುವವರ ಜೊತೆ ಗಲಾಟೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.ನಮ್ಮ ಏರಿಯಾಗೆ ಬಂದು ಕೂದಲು ಏಕೆ ಕೊಂಡುಕೊಳುತ್ತಿದ್ದಿರಿ ಎಂದು ಗಲಾಟೆಯಾಗಿದೆ.ಇದೇ ವೇಳೆ ಕಾಮಪ್ಪ ಹತ್ಯೆಗೈದು ಬಾವಿಯಲ್ಲಿ ಬಿಸಾಕಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಸ್ಥಳಕೆ ಹಾರೂಗೇರಿ ವೃತ CPI ರವೀಂದ್ರಣ ಬಡಪಕ್ಕಿರಪ್ಪಗೋಳ ಹಾಗೂ ಹಾರೂಗೇರಿ PSI ಮಲ್ಲಪ್ಪಾ ಉಪ್ಪಾರ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ‌ ಘಟನೆ ನಡೆದಿದೆ.

Tags: