ರಾಜ್ಯದಲ್ಲಿ ಕಂಪ್ಲೀಟ್ ಓಪನ್ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು. ಇನ್ಮುಂದೆ 50:50, ನೈಟ್ ಕಫ್ರ್ಯೂ ಇರುವುದಿಲ್ಲ. ರೂಲ್ಸ್ನಿಂದ ಬೇಸತ್ತಿದ್ದ ಜನರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ ಅವಕಾಶ ನೀಡಲಾಗಿದ್ದು, ಹೊರಾಂಗಣದಲ್ಲಿ ಮದುವೆಗಳಿಗೆ 300 ಜನರಿಗೆ ಅವಕಾಶ ನೀಡಲಾಗಿದೆ. ಇನ್ನು ರ್ಯಾಲಿ, ಸಭೆ, ಸಮಾರಂಭ, ಜಾತ್ರೆಗೆ ನಿಷೇಧ ಇರಲಿದ್ದು. ಜನ ಸೇರೋದಕ್ಕೆ ನಿರ್ಬಂಧ ಮುಂದುವರಿಯಲಿದೆ. ಅದೇ ರೀತಿ ಪ್ರತಿಭಟನೆ, ಧರಣಿಗೆ ನಿಷೇಧ ಮುಂದುವರಿದ್ದು, ರೂಲ್ಸ್ ತೆರವಾದ್ರೂ ರ್ಯಾಲಿ ಮಾಡುವಂತಿಲ್ಲ ಎಂಬುದನ್ನು ಸಭೆ ಬಳಿಕ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.