Bailahongala

ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

Share

ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇದೇ ಜನವರಿ 28ರಂದು ಶುಕ್ರವಾರ ಸಾಯಂಕಾಲ 5 ಗಂಟೆಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನೆರವೇರಿತು.ಗೌರವ ಅಧ್ಯಕ್ಷರಾಗಿ ಸಿ.ಕೆ.ಮೆಕ್ಕೇದ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ.ಸಿ.ಬಿ.ಗಣಾಚಾರಿ, ಸಲಹಾ ಸಮಿತಿ ಅಧ್ಯಕ್ಷರಾಗಿ ಅಶೋಕ ಜಂತಿ, ನೂತನ ಅಧ್ಯಕ್ಷರಾಗಿ ಬಸನಗೌಡ ಪೊಲೀಸ್ ಪಾಟೀಲ್, ನೂತನ ಉಪಾಧ್ಯಕ್ಷರಾಗಿ ಶಂಕರ್ ಕೋಟಗಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಭದ್ರಶೆಟ್ಟಿ, ಸಹ ಕಾರ್ಯದರ್ಶಿಯಾಗಿ ರಾಮನಗೌಡ ಪಾಟೀಲ್, ಖಜಾಂಚಿಯಾಗಿ ಪರ್ವತಗೌಡ ಪಾಟೀಲ್, ನಿರ್ದೇಶಕರಾಗಿ ಸಂಗಣ್ಣ ಭದ್ರಶೆಟ್ಟಿ, ಮಲ್ಲಪ್ಪ ಢವಳೆ, ಕಾಶಪ್ಪ ಭದ್ರಶೆಟ್ಟಿ, ಯಮನಪ್ಪ ಚಿಕ್ಕನ್ನವರ, ಮಲ್ಲವ್ವ ಪಠಾತ, ಸಿದ್ದನಗೌಡ ಪಾಟೀಲ್ ಅವರು ಆಯ್ಕೆಯಾದರು.ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಸುಭಾಷ ಮೆಕ್ಕೇದ, ಮಡಿವಾಳಪ್ಪ ಬಡ್ಲಿ, ಬಸವರಾಜ್ ಕೊರಿಕೊಪ್ಪ, ಮಾಜಿ ಗ್ರಾ.ಪಂ.ಸದಸ್ಯರಾದ ಮಂಜುನಾಥ ಹೂವಿನ್, ಈರಣಗೌಡ ಶೀಲವಂತರ, ಗ್ರಾಮದ ಹಿರಿಯರಾದ ಬಸಪ್ಪ ಬೊಳತ್ತಿನ, ಮಹಾಂತೇಶ ಸೊಗಲದ, ಈರಪ್ಪ ದರಖಾಶಿ, ಶಂಕರ ಢವಳೆ, ಶ್ರೀಕಾಂತ ಕೋಟಗಿ, ಯುವಕರಾದ ಸಂತೋಷ ಹಡಪದ, ಆನಂದ ಕಡಗನ್ನವರ, ಮಹಾಂತೇಶ ಹಿತ್ತಲಗಡ್ಡಿ, ಸಾಗರ ಮಾಟೊಳ್ಳಿ, ಶಂಕರಗೌಡ ಪಾಟೀಲ್, ಸುರೇಶ ಅಂಗಡಿ, ಪ್ರವೀಣ ಮಡಿವಾಳರ, ಆದರ್ಶಗೌಡ ಪಾಟೀಲ್, ರಾಹುಲ್ ಪಾಟೀಲ್, ನಿಂಗನಗೌಡ ಪಾಟೀಲ್, ಆಕಾಶ ಭದ್ರಶೆಟ್ಟಿ, ಪ್ರಜ್ವಲ್ ಸುತಗಟ್ಟಿ, ವಿನಾಯಕ ಸೊಗಲದ, ಸುಹಾಸ್ ಕೋಟಗಿ, ಆಕಾಶ ಸವದತ್ತಿ, ಬಸನಗೌಡ ನಿಂಗನ್ನವರ, ಮಡ್ಡೆಪ್ಪ ಅಂಗಡಿ, ಮಂಜು ಹಡಪದ, ವಿಕಾಸ್ ಹಾದಿಮನಿ, ವೀರಕುಮಾರ್ ಮುತ್ನಾಳ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags: