State

ಮಹಾತ್ಮಾ ಗಾಂಧೀಜಿ ಮಾರ್ಗದರ್ಶನ, ಬೋಧನೆ ಎಲ್ಲರೂ ಅನುಸರಿಸಿ: ಪ್ರಧಾನಿ ಮೋದಿ ಕರೆ

Share

ಎಲ್ಲಿ ಕರ್ತವ್ಯ ಪ್ರಜ್ಞೆ ಇರುತ್ತದೆಯೋ, ಅಲ್ಲಿ ಭ್ರμÁ್ಟಚಾರ ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ. ಭ್ರμÁ್ಟಚಾರವೆಂಬುದು ಒಂದು ದೇಶವನ್ನು ಟೊಳ್ಳಾಗಿಸುವ ಹುಳು ಇದ್ದಂತೆ. ನಾವು ಸಾಧ್ಯವಾದಷ್ಟು ಬೇಗ ಅದನ್ನು ತೊಡೆದು ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಇಂದು ಪ್ರಧಾನಿ ಮೋದಿ ಅವರ ಈ ವರ್ಷದ ಮೊದಲ ಮನ್ ಕೀ ಬಾತ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ಇಂದು ಮಹಾತ್ಮ ಗಾಂಧಿ ಪುಣ್ಯತಿಥಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೂ ಪೂರ್ವ ಗಾಂಧಿಜಿಯನ್ನು ಸ್ಮರಿಸಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ನಮೋ ಇಂದು ಮಹಾತ್ಮ ಗಾಂಧಿಯವರ 74ನೇ ಪುಣ್ಯತಿಥಿ. ಗಾಂಧಿಯವರ ಮಾರ್ಗದರ್ಶನ, ಬೋಧನೆಗಳನ್ನು ನೆನಪಿಸಿಕೊಂಡು, ಅನುಸರಿಸಬೇಕು. ಕೆಲವೇ ದಿನಗಳ ಹಿಂದೆ ಭಾರತದ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಅಂದು ರಾಜಪಥದಲ್ಲಿ ಪ್ರದರ್ಶನಗೊಂಡ ಭಾರತದ ಶೌರ್ಯ, ಸಾಮಥ್ರ್ಯಗಳ ಝಲಕ್‍ಗಳು ಪ್ರತಿ ಭಾರತೀಯನಲ್ಲೂ ಹೆಮ್ಮೆ, ಗೌರವ, ಉತ್ಸಾಹ ತುಂಬಿದವು. ಇನ್ನು ಮುಂದೆ ಜನವರಿ 23ರಿಂದಲೇ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಜ.23 ನೇತಾಜಿ ಸುಭಾμï ಚಂದ್ರ ಬೋಸ್‍ರ ಜನ್ಮದಿನ ಇರುವುದರಿಂದ, ಅದನ್ನೂ ಸೇರಿಸಿ ಆಚರಣೆ ಮಾಡಲಾಗುವುದು. ಇನ್ನು ಪ್ರತಿ ನಾಗರಿಕನೂ ಒಂದಲ್ಲ ಒಂದು ಬಾರಿಯಾದರೂ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬೇಕು. ಅಲ್ಲದೆ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರಿಂದ ನಿಮ್ಮಲ್ಲಿ ವಿಶೇಷ ಶಕ್ತಿ ಮತ್ತು ಸ್ಫೂರ್ತಿ ಮೂಡುತ್ತದೆ ಎಂದು ಹೇಳಿದರು.
ಭಾರತೀಯ ಸಶಸ್ತ್ರ ಪಡೆಗಳಲ್ಲಿರುವ ಕೆಲವು ಯೋಧರಿಂದ ನನಗೆ ಪತ್ರ ಬಂದಿದೆ.

ಅದೇ ರೀತಿ ಒಂದು ಕೋಟಿಗೂ ಹೆಚ್ಚು ಮಕ್ಕಳು ಕೂಡ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು ಅಮರ್ ಜವಾನ್ ಜ್ಯೋತಿಯ ಮಹತ್ವವನ್ನು ವಿವರಿಸಿ ಬರೆದಿದ್ದಾರೆ. ದೇಶಕ್ಕಾಗಿ ಹುತಾತ್ಮರಾದ ತ್ಯಾಗ ಮತ್ತು ಅವರ ಕುಟುಂಬದ ಬಗ್ಗೆ ಈ ಪತ್ರದ ಮೂಲಕ ಇನ್ನಷ್ಟು ತಿಳಿಯುವಂತಾಯಿತು. ಅμÉ್ಟೀ ಅಲ್ಲ, ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್‍ನ ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯಲ್ಲಿ ವಿಲೀನ ಮಾಡುವಾಗ ಅದೆμÉ್ಟೂೀ ಹಿರಿಯ ಸೇನಾ ನಾಯಕರು ಭಾವುಕರಾದರು. ಇದು ಹುತಾತ್ಮ ಯೋಧರಿಗೆ ನೀಡುತ್ತಿರುವ ನಿಜವಾದ ಗೌರವ ಎಂದು ಪ್ರಧಾನಿ ಮೋದಿ ಹೇಳಿದರು.

ಸದ್ಯ ದೇಶದಲ್ಲಿ ಒಮಿಕ್ರಾನ್‍ನಿಂದಾಗಿ ಕೊರೊನಾ ಮೂರಲೇ ಅಲೆ ಉಂಟಾಗಿದ್ದು, ಸೋಂಕಿನ ಪ್ರಸರಣ ಅತ್ಯಂತ ವೇಗವಾಗಿ ಆಗಿತ್ತು. ಆದರೆ ಭಾರತವೂ ಕೂಡ ಅμÉ್ಟೀ ಆಕ್ರಮಣಕಾರಿಯಾಗಿ ಹೋರಾಟ ನಡೆಸಿದೆ. ಈಗಾಗಲೇ 4.5 ಕೋಟಿ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾಗಿದೆ. ಇತ್ತೀಚೆಗೆ ಸೋಂಕಿನ ಪ್ರಮಾಣ ತಗ್ಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಅದರಲ್ಲೂ ಕೂಡ ಕೊರೊನಾ ಲಸಿಕೆ ಮೇಲೆ ನಮ್ಮ ದೇಶದ ಜನರು ಇಟ್ಟ ನಂಬಿಕೆ ನಿಜಕ್ಕೂ ದೊಡ್ಡದು. 15-18 ವರ್ಷದವರಿಗೆ ಕರೊನಾ ಲಸಿಕೆ ನೀಡುವ ಮೂಲಕ ಅವರು ಯಾವುದೇ ಅಡೆತಡೆಯಿಲ್ಲದೆ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಕೊರೊನಾ ಭಯವನ್ನು ಅವರಲ್ಲಿ ಕಡಿಮೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಒಟ್ಟಿನಲ್ಲಿ ವರ್ಷದ ಮೊದಲ ಮನ್ ಕಿ ಬಾತ್‍ನಲ್ಲಿ ಪ್ರಧಾನಿ ಮೋದಿ ಹಲವು ವಿಚಾರಗಳನ್ನು ದೇಶದ ಜನತೆ ಉದ್ದೇಶಿಸಿ ಮಾತನಾಡಿದರು.

Tags: