Belagavi

ಚಿದಾನಂದ ಸವದಿ ಹುಕ್ಕೇರಿ ಹಿರೇಮಠಕ್ಕೆ ಬೇಟಿ : ಶ್ರೀಗಳಿಂದ ಆಶೀರ್ವಾದ!

Share

ಬೆಳಗಾವಿ :   ಬಿಜೆಪಿಯ ಯುವ ಮುಖಂಡ ಚಿದಾನಂದ್ ಲಕ್ಷ್ಮಣ ಸವದಿಯವರು ಬೆಳಗಾವಿ ನಗರದ ಲಕ್ಷ್ಮಿ ಟೆಕಡಿ ಯಲ್ಲಿರುವ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಕರ್ನಾಟಕ ರಾಜ್ಯ ಬಿಸಿ ಊಟ ಸ್ವಯಂ ಸೇವಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಆದ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಆಶೀರ್ವಾದವನ್ನು ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ ಸವದಿ ಅವರು ಹುಕ್ಕೇರಿ ಹಿರೇಮಠಕ್ಕು ಸವದಿ ಮನೆತನಕ್ಕೂ ಅವಿನಾಭಾವ ಸಂಬಂಧ. ಶ್ರೀಗಳು ನಮಗೆ ಸತತವಾಗಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ತಂದೆಯವರು ಶಾಸಕರಾಗಿ, ಮಂತ್ರಿಗಳಾಗಿ ಉಪಮುಖ್ಯಮಂತ್ರಿಗಳಾಗಿ ಕಾರ್ಯವನ್ನ ನಿರ್ವಹಿಸಿದಾಗಲೂ ಕೂಡ ಶ್ರೀಗಳ ಮಾರ್ಗದರ್ಶನ ನಮ್ಮ ಮೇಲೆ ಸದಾ ಇದೆ. ಹೀಗೆಯೇ ಅವರ ಆಶೀರ್ವಾದ ಸದಾ ಇರಲಿ ಎಂದರು.
ಶ್ರೀ ಷ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಲಕ್ಷ್ಮಣ ಸವದಿ ಅವರು ಆಧ್ಯಾತ್ಮ ಜೀವಿಗಳು.

ಅವರ ಮನೆತನದಲ್ಲಿ ಗುರುಗಳ ಬಗ್ಗೆ, ಹಿರಿಯರ ಬಗ್ಗೆ ತುಂಬಾ ಆಸಕ್ತಿ ಇದೆ. ಅವರ ಮಕ್ಕಳು ಕೂಡ ಇವತ್ತು ಅದೇ ಮಾರ್ಗದಲ್ಲಿ ಮುಂದು ವರೆಯುತ್ತಿರುವುದು ನಮಗೆ ಅತೀವ ಸಂತಸ ತಂದಿದೆ ಎಂದರು. ಬಿಜೆಪಿಯ ಯುವ ಮುಖಂಡ ಮಹಾಂತೇಶ್ ಒಕ್ಕೂoದ, ಆರ್ ಎಸ್ ಎಸ್ ನ ಅಣ್ಣಾಸಾಹೇಬ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು

Tags: