Belagavi

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗುರು-ಶಿಷ್ಯೆಯರ ಸರಸ ಸಲ್ಲಾಪ

Share

-ಹೌದು ಗುರು-ಶಿಷ್ಯೆಯರಿಬ್ಬರು ಸರಸದಿಂದ ಪರಸ್ಪರ ತುಟಿಯಿಂದ ತುಟಿಗೆ ಮುತ್ತಿಟ್ಟು ಗೆ ಸರಸ ಸಲ್ಲಾಪ ಆಡುತ್ತಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಿಂದ ನೊಂದಿರುವ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಲು ಚರ್ಚೆ ಖಾನಾಪೂರ ತಾಲೂಕಿನಲ್ಲಿ ನಡೆದಿದೆ

 

ಏನಿದು ಪ್ರಕರಣ….?
ತಾಲೂಕಿನ ಖಾಸಗಿ ಪ್ರೌಢಶಾಲೆಯೊಂದರ ಶಿಕ್ಷಕ ಅದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಯೊಂದಿಗೆ ಖಾಸಗಿಯಾಗಿ ಇರುವ ಕೆಲ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿಯದುತ್ತಿವೆ. ಶಿಕ್ಷಕನ ಕಲ್ಯಾಣ ಗುಣದ ಬಗ್ಗೆ ಮಾಹಿತಿ ದೊರೆಯುತ್ತಲೇ ಪ್ರೌಢಶಾಲೆಯ ಆಡಳಿತ ಮಂಡಳಿ ಶಿಕ್ಷಕನನ್ನು ಶನಿವಾರ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ. ಇತ್ತ ತನ್ನ ಮಗಳ ವರ್ತನೆಯಿಂದ ಮನನೊಂದ ವಿದ್ಯಾರ್ಥಿನಿಯ ಪೋಷಕರು ಕಳೆದೊಂದು ವಾರದಿಂದ ಆಕೆ ಶಾಲೆಗೆ ಹೋಗುವುದನ್ನು ಬಿಡಿಸಿ ಮನೆಯಲ್ಲಿರಿಸಿಕೊಂಡಿದ್ದಾರೆ.
“ತನ್ನ ಶಿಕ್ಷಕನ ಜೊತೆ ವಿಡಿಯೋದಲ್ಲಿರುವಾಕೆ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ. ಓದಿನಲ್ಲಿ ಮುಂದಿದ್ದಾಳೆ. ತೀವ್ರ ಬಡ ಕುಟುಂಬದಿಂದ ಬಂದಿರುವ ಆಕೆ ಕಷ್ಟಪಟ್ಟು ಓದುತ್ತಿದ್ದಾಳೆ. ಆದರೆ ಆಕೆ ಎಲ್ಲರೊಂದಿಗೆ ಸಲುಗೆಯಿಂದ ಇರುವುದನ್ನು ಗಮನಿಸಿದ್ದ ಶಿಕ್ಷಕ ಕಳೆದ ಕೆಲದಿನಗಳಿಂದ ಆಕೆಯನ್ನು ಪ್ರೀತಿಸತೊಡಗಿದ್ದರು. ಅವರಿಬ್ಬರೂ ಶಾಲೆಯಲ್ಲಿ ಬಹಳ ಸಲುಗೆಯಿಂದ ಇರುತ್ತಿದ್ದರು. ಕೆಲದಿನಗಳ ಹಿಂದೆ ಶಾಲೆಯ ಅಟೆಂಡರ್ ಜೊತೆ ಮಂಗಳ ಕಾರ್ಯವೊಂದರಲ್ಲಿ ಭಾಗವಹಿಸಲು ಆಕೆಯನ್ನು ಶಿಕ್ಷಕರು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಆಗ ಇವರಿಬ್ಬರೂ ಖಾಸಗಿಯಾಗಿ ಕಳೆದಿದ್ದ ಕೆಲ ವಿಡಿಯೋಗಳನ್ನು ಶಿಕ್ಷಕ ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಶಿಕ್ಷಕನ ಮೊಬೈಲ್ನಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ಬಳಿಕ ಆಕೆ ಮಾನಸಿಕವಾಗಿ ನೊಂದಿದ್ದಾಳೆ. ಆಕೆಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಖಾನಾಪೂರ ತಾಲೂಕಿನಲ್ಲಿ ಕೆಲವು ಕಡೆಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಒಟ್ಟಾರೆ ಗುರುಶಿಷ್ಯರ ನಡುವಿನ ಪವಿತ್ರ ಸಂಬಂಧಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದಿರುವ ಈ ಘಟನೆ ತಾಲೂಕಿನಲ್ಲಿ ಸಧ್ಯ ಗಂಭೀರ ಚರ್ಚೆಯ ವಿಷಯವಾಗಿದೆ. ಇಂತಹ ಗಂಭೀರ ವಿಷಯದಲ್ಲಿ ನೊಂದ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮೀನಾಮೀಷ ಎಣೆಸುತ್ತಿರುವ ತಾಲೂಕಿನ ರಾಜಕೀಯ ಮುಖಂಡರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ.

ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ ಆದರೆ ಇದುವರೆಗೂ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ

 

Tags: