Belagavi

ಪಂತಬಾಳೇಕುಂದ್ರಿಯ ಯೋಧ ಅಂತಿಮ ಸಂಸ್ಕಾರ ಪಂತಬಾಳೇಕುಂದ್ರಿಯಲ್ಲಿ ಶೋಕಸಾಗರದ ಮಧ್ಯೆ ನೆರವೇರಿತು.

Share

ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಹೃದಯಾಘಾತದಿಂದ ಅಸು ನೀಗಿದ ಬೆಳಗಾವಿಯ ಪಂತಬಾಳೇಕುಂದ್ರಿಯ ಯೋಧ ಮಯೂರ ಕೆ ಚಂದನಶಿವ ಅವರ ಅಂತಿಮ ಸಂಸ್ಕಾರ ಪಂತಬಾಳೇಕುಂದ್ರಿಯಲ್ಲಿ ಶೋಕಸಾಗರದ ಮಧ್ಯೆ ನೆರವೇರಿತು.

೪೨ ವರ್ಷದ ಮಯೂರ ಚಂದನಶಿವ ೨೩ ವರ್ಷಗಳ ಹಿಂದೆ ಸೇನೆಯನ್ನು ಸೇರಿದ್ದರು .ಕೆಲವೇ ದಿನಗಳ ಹಿಂದೆ ಹವಾಲ್ದಾರ್ ಆಗಿ ಪದೋನ್ನತಿ ಹೊಂದಿದ್ದ ಇವರು ಜಮ್ಮು ಕಾಶ್ಮೀರದ ಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಬುಧವಾರದಂದು ಹೃದಯಾಘಾತದಿಂದ ನಿಧನರಾದರು.ಅಗಲಿದ ಯೋಧನ ಪಾರ್ಥಿವ ಶರೀರವನ್ನು ಗುರುವಾರ ದಿಲ್ಲಿ ಗೋವಾ ಮಾರ್ಗವಾಗಿ ಬೆಳಗಾವಿಗೆ ತರಲಾಯಿತು.
ಯೋಧನ ಪಾರ್ಥಿವ ಸ್ವಗ್ರಾಮವನ್ನು ತಲುಪುತ್ತಿದ್ದಂತೆಯೇ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಅಗಲಿದ ಯೋಧನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಧನ ಅಗಲಿಕೆಯ ಕುರಿ ತು ಸಂತಾಪ ವ್ಯಕ್ತಪಡಿಸಿದರು.

ಮಾಜಿ ಸೈನಿಕ ಕಲ್ಯಾಣ ಸಂಘದ ಅಧ್ಯಕ್ಷ M GPatil ಅವರು ಮಾತನಾಡಿ ಅಗಲಿದ ಯೋಧನಿಗೆ ಸಕಲ ಮರ್ಯಾದೆ ಯೊಂದಿಗೆ ಯೋಧನ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದರು

ಮೃತ ಯೋಧ ಪಂತ ಬಡಾವಣೆ ಸದಸ್ಯರು ಆದ ಮಾಜಿ ಯೋಧ ಎಸ್ ಚಂದನಶಿವ ಅವರ ಪುತ್ರರಾಗಿದ್ದಾರೆ.
ಪತ್ನಿ ಮಕ್ಕಳು ಸೇರಿದಂತೆ ಬಂಧು ವರ್ಗವನ್ನು ಇವರು ಅಗಲಿದ್ದಾರೆ.ಯೋದನ ಸ್ವಗ್ರಾಮದ ರುದ್ರ ಭೂಮಿಯಲ್ಲಿ ಸಕಲ ಸೇನಾ ಮರ್ಯಾದೆ ಯೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು

Tags: