ಬೆಳಗಾವಿಯ ಸಾರಥಿ ನಗರದ ನಿವೇಶನದಲ್ಲಿ ಅನಧಿಕೃತ ಪಾತೀಮಾ ಮಸೀದಿ ನಿರ್ಮಾಣ ಆರೋಪ ಹಿನ್ನಲೆ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ಬೆಳಗಾವಿ ಮಹಾನಗರ ಪಾಲಿಕೆ ವಕ್ಫ್ ಬೋರ್ಡ್ಗೆ ಕೂಡಲೇ ಮಸೀದಿಗೆ ಬೀಗ ಹಾಕುವಂತೆ ನೋಟಿಸ್ ನೀಡಿದ ಹಿನ್ನಲೆ
ಪಾತೀಮಾ ಮಸೀದಿಗೆ ವಕ್ಫ್ ಬೋರ್ಡ್ ಬೀಗ ಹಾಕಿದೆ.
ವಸತಿ ಉದ್ದೇಶ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ಮಾಡುತ್ತಿದ್ದಾರೆ ಹಾಗೂ ನಿವೇಶನದಲ್ಲಿ ಅನಧಿಕೃತ ಪಾತೀಮಾ ಮಸೀದಿ ನಿರ್ಮಾಣ ಆರೋಪ ಹಿನ್ನಲೆ ಮಸೀದಿಯನ್ನು ಕೂಡಲೇ ಬಂದ್ ಮಾಡಿಸುವಂತೆ ಆಗ್ರಹಿಸಿ ಒಂದು ವಾರದ ಹಿಂದಷ್ಟೇ ಹಿಂದುಪರ ಸಂಘಟನೆ ಹಾಗೂ ಬಿಜೆಪಿ ಸ್ಥಳೀಯ ನಾಯಕರಿಂದ ಡಿಸಿಗೆ ಮನವಿಸಲ್ಲಿಸಲಾಗಿತ್ತು. ಇದೀಗ ಬೆಳಗಾವಿ ಮಹಾನಗರ ಪಾಲಿಕೆ ವಕ್ಫ್ ಬೋರ್ಡ್ಗೆ ನೋಟಿಸ್ ನೀಡಿದ ಹಿನ್ನಲೆ ಪಾತೀಮಾ ಮಸೀದಿಗೆ ವಕ್ಫ್ ಬೋರ್ಡ್ ಬೀಗ ಹಾಕಲಾಗಿದೆ. ಇನ್ನು ಅಹಿತಕರ ಘಟನೆ ನಡೆಯದಂತೆ ಮಸೀದಿ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.