Hukkeri

ಕರಗಾಂವ ಗ್ರಾಮ ಪಂಚಾಯತಿ ನಡೆದ ಕಾಮಗಾರಿ ಬಗ್ಗೆ ಮಾಹಿತಿ ಕೇಳಿದರೆ ಮಾನನಷ್ಟ ಮೊಕದ್ದಮೆ : ಕಾಡಗೌಡಾ ಪಾಟೀಲ.

Share

ಗ್ರಾಮ ಪಂಚಾಯತಿ ಯಲ್ಲಿ ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ಹಕ್ಕು ಅಡಿ ವಿವರಣೆ ಕೇಳಿದರೆ ಮಾನನಷ್ಟ ಮೊಕದ್ದಮೆ ಹೂಡಿ ನನ್ನ ರಾಜಕೀಯ ತೇಜೋವದೆ ಮಾಡುತ್ತಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಜೆ ಡಿ ಎಸ್ ಮುಖಂಡ ಕಾಡಗೌಡಾ ಪಾಟೀಲ ಆರೋಪಿಸಿದ್ದಾರೆ. ಅವರು ಇಂದು ತಮ್ಮ ತೋಟದ ಮನೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ..

ಕರಗಾಂವ ಗ್ರಾಮ ಪಂಚಾಯತಿಯಲ್ಲಿ 2008 ರಿಂದ 2021 ರ ವರಗೆ ಸುವರ್ಣ ಗ್ರಾಮ ಮತ್ತು ನರೆಗಾ ಯೋಜನೆ ಅಡಿಯಲ್ಲಿ ಕೈ ಕೊಂಡ ಕಾಮಗಾರಿಗಳ ವಿವರಣೆ ನೀಡುವಂತೆ ಮಾಹಿತಿ ಹಕ್ಕು ಅಡಿಯಲ್ಲಿ ಕೇಳಲಾಗಿತ್ತು, ಅದಕ್ಕೆ ಪಿ ಡಿ ಓ ಗಳು ಖಾಲಿ ಪೇಪರ ನೀಡಿದನ್ನು ಮಾದ್ಯಮಗಳ ಮೂಲಕ ಇವರ ಆಕ್ರಮಗಳ ಬಗ್ಗೆ ಮಾತನಾಡಿದ್ದನ್ನು ಕಂಡು ಹಾಲಿ ಅದ್ಯಕ್ಷರು ನನ್ನ ಮೇಲೆ ಮಾನಬಷ್ಟ ಮೊಕದ್ದಮೆ ಕೇಸ ಧಾಖಲು ಮಾಡಿದ್ದಾರೆ, ನಾನು ಗ್ರಾಮ ಸುಧಾರಣೆ ಬಗ್ಗೆ ಮಾಹಿತಿ ಕೆಳಿದರೆ ಕೇಸ್ ಹಾಕುವ ಮೂಲಕ ನನನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದಾರೆ, ನಮ್ಮ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳ ಪ್ರತಿಷ್ಟಿತ ವಾಗಿದೆ ಹಾಗೂ ನನ್ನ ರಾಜಕೀಯ ಏಳಿಗೆ ಸಹಿಸದೆ ನನಗೆ ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ.
ಇದಕ್ಕೆ ನಾನು ಹೇದರದೆ ಕಾನೂನು ಸಮರ ನಡೆಸುತ್ತೆನೆ ,ಕಾನೂನು ನೀಡುವ ಶಿಕ್ಷೆ ಅನುಭವಿಸಲು ಸಿದ್ದನಿದ್ದೆನೆ,ಗ್ರಾಮದ ಅಭಿವೃದ್ಧಿಗೆ ಹೋರಾಟ ಮಾಡುತ್ತೇನೆ ಇವರ ಆಕ್ರಮಗಳನ್ನು ಬಯಲು ಮಾಡುತ್ತೆನೆ ಎಂದರು ,

Tags: