hubbali

ಕೇಂದ್ರ ಸರ್ಕಾರ ಬ್ಯಾಲೆನ್ಸ್ ಬಜೆಟ್ ಮಂಡನೆ : ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ವಿನಯ್ ಜವಳಿ

Share

ಇಂದು ಮಂಡಿಸಿದ ಕೇಂದ್ರ ಸರ್ಕಾರ ಬಜೆಟ್ ಮುಂದಿನ 25 ವರ್ಷದ ದೂರದೃಷ್ಟಿ ಇಟ್ಟುಕೊಂಡು ಮಂಡಿಸಿದ ಬಜೆಟ್ ಆಗಿದೆ ಎಂದು ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ವಿನಯ್ ಜವಳಿ ಹೇಳಿದರು.

ನಗರದಲ್ಲಿ ಇಂದು ಮಾತನಾಡಿದ ಅವರು ಕೇಂದ್ರ ಸರ್ಕಾರ ಬ್ಯಾಲೆನ್ಸ್ ಬಜೆಟ್ ಮಂಡಿಸಿದ್ದು
ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಹೆಚ್ಚಳ ಮಾಡಿರುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ‌. ಐದು ನದಿಗಳ ಜೋಡಣೆ-ಡಿಪಿಆರ್ ಸಿದ್ಧಪಡಿಸಲು ಆದ್ಯತೆ ಖುಷಿಯ ವಿಚಾರ ಎಂದರು. ಕೊರೊನಾ ಸಂದರ್ಭದಲ್ಲಿ ಆದ ಅರ್ಥಿಕ ಹಿನ್ನಡೆಯನ್ನು ಸರಿದೂಗಿಸುವ ಕೆಲಸ ಮಾಡಿದೆ.
ಸಣ್ಣಕೈಗಾರಿಗೆ, ಕೃಷಿ ಕೈಗಾರಿಕೆಗಳಿಗೆ ಉತ್ತೇಜಕ್ಕೆ ಒತ್ತು.

ಗಂಗಾ ನದಿ ಪಕ್ಕದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಅವಕಾಶ ನೀಡಿದ್ದು ಖುಷಿಯ ವಿಚಾರ. 3ಕೋಟಿ 80 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ.
ಬಡವರಿಗೆ ಮನೆಗಳ ನಿರ್ಮಾಣಕ್ಕೆ ಹೆಚ್ಚಿಮ ಒತ್ತು ನೀಡಿದ್ದಾರೆ ಹಾಗೂ ಭೂ ದಾಖಲೆಗಳನ್ನು ಸರಳಿಕರಣ ಮಾಡಲು ‘ಒಂದು ದೇಶ ಒಂದು ನೋಂದಣಿ’ ಮಾಡಿದ್ದು ಸ್ವಾಗತ ಎಂದರು. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಯೋಜನೆಯಡಿ ಶೇಕಡ 60% ರಷ್ಟು ಸ್ಥಳೀಯ ಖರೀದಿಗೆ ಒತ್ತು ನೀಡಲಾಗಿದೆ.ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆದ್ರೆ ಆದಾಯ ತೆರಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇತ್ತು, ಆದ್ರೆ ಅದು ಆಗಿಲ್ಲ ಎಂದರು.

Tags: