Gokak

ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ನಿಮಿತ್ಯ ರಕ್ತದಾನ ಶಿಬಿರ

Share

ಶ್ರೀರಾಮ ಸೇನೆ ಹಾಗೂ ಸಂಗೊಳ್ಳಿ ರಾಯಣ್ಣ ಫೌಂಡೇಶನ ಗೋಕಾಕ ವತಿಯಿಂದ ಬ್ರಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಗೋಕಾಕ್‍ನಲ್ಲಿ ಶ್ರೀರಾಮ ಸೇನೆ ಹಾಗೂ ಸಂಗೊಳ್ಳಿ ರಾಯಣ್ಣಾ ಫೌಂಡೇಶನ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಬಲಿದಾನ್ ದಿವಸ ಪ್ರಯುಕ್ತ 100 ಜನ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾದರು.

ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಅಸ್ಮಿತೆ. ಅವರ ತ್ಯಾಗ, ಬಲಿದಾನ, ಶೌರ್ಯ ನಮಗೆ ಎಂದೆಂದಿಗೂ ಆದರ್ಶವಾಗಿರಬೇಕು. ಇಂದಿನ ಯುವಕರ ರಾಯಣ್ಣನ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಂಬಿರಾವ ಪಾಟೀಲ ಬಿಜೆಪಿ ನಗರಘಟಕ ಗೋಕಾಕ ಅಧ್ಯಕ್ಷರು ಭೀಮಶಿ ಅಣ್ಣಾ ಭರಮಣ್ಣವರ, ರಾಮ ಸೇನೆ ಗೋಕಾಕ ತಾಲೂಕಾ ಅಧ್ಯಕ್ಷ ರವಿ ಪೂಜೇರಿ, ರವಿ ಕೋಕಿತಕರ, ಶಿವು ಭಂತೆ, ಸುಭಾμï ಕಾಸರಕರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವರಾಜ್ ಅಣ್ಣಾ ನಾಯಕ, ಜಿಲ್ಲಾಕಾರ್ಯಾದ್ಯಕ್ಷರು ವಿನಯ ಅಂಗ್ರೋಳಿ ಸೇರಿದಂತೆ ಶ್ರೀರಾಮ ಸೇನಾ ಗೋಕಾಕನ ಕಾರ್ಯಕರ್ತರು, ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags: