Khanapur

ಕರಡಿ ದಾಳಿ: ಖಾನಾಪುರ ತಾಲೂಕಿನ ರೈತನಿಗೆ ಗಂಭೀರ ಗಾಯ

Share

ನೀರು ಹಾಯಿಸಲು ಜಮೀನಿಗೆ ಹೋಗಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪುರ ತಾಲೂಕಿನ ಪಾಲಿ ಗ್ರಾಮದ ಹೆಮ್ಮಡಗಾದಲ್ಲಿ ನಡೆದಿದೆ.

ರೈತನ ಮೇಲೆ ಕರಡಿ ದಾಳಿ ಮಾಡಿದ ವೇಳೆ ನಾಯಿಗಳು ಬಂದಿದ್ದರಿಂದ ಕರಡಿ ಹೆದರಿ ಅಲ್ಲಿಂದ ಓಡಿ ಹೋಗಿದೆ. ತೀವ್ರವಾಗಿ ಗಾಯಗೊಂಡಿದ್ದ ರೈತ ಒಂದೂವರೇ ಕಿ.ಮೀ ನಡೆದುಕೊಂಡು ಪಾಲಿ ಗ್ರಾಮಕ್ಕೆ ಬಂದಿದ್ದಾನೆ.

ಈ ವೇಳೆ ಗಾಯಾಳುವನ್ನು ಗಮನಿಸಿದ ಪ್ರವೀಣ ಪಾಟೀಲ್ ಮತ್ತು ಪಂಡಿತ್ ಓಗಳೆ ಮತ್ತು ಇನ್ನಿತರರು ಸೇರಿಕೊಂಡು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ರೈತನನ್ನು ಕೆಎಲ್‍ಇ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ರೈತ ಚಿಕಿತ್ಸೆ ಪಡೆಯುತ್ತಿದ್ದಾನೆ.

Tags: