hubbali

ಅಹವಾಲು ಸ್ವೀಕರಿಸದ ಸಿಎಂ : ನಿರಾಸೆಗೊಂಡ ಜನರು

Share

ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ಬಂದಂತಹ ಜನರಿಗೆ ಇಂದು ನಿರಾಸೆಯಾಗಿದೆ.

ಹೌದು, ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ಹಾವೇರಿ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದರು. ನಂತರ ಹುಬ್ಬಳ್ಳಿ ತಮ್ಮ ನಿವಾಸಿದಲ್ಲಿ ವಾಸ್ತವ್ಯ ಮಾಡಿದರು. ಪರಿಣಾಮ ಇಂದು ಧಾರವಾಡ ಜಿಲ್ಲೆಯ ವಿವಿಧ ತಾಲೂಕಿನ ಜನರು ತಮ್ಮ ವಿವಿಧ ಸಮಸ್ಯೆಗಳ ಹಾಗೂ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲು ಬಂದಿದ್ದರು. ಆದರೆ ಮುಖ್ಯಮಂತ್ರಿಗಳು ಮಾತ್ರ ಜನರ ಅಹವಾಲು ಸ್ವೀಕಾರ ಮಾಡದೇ ಹಾಗೇ ತೆರಳಿದ್ದು, ಜನರ ಅಸಮಾಧಾನಕ್ಕೆ ಕಾರಣವಾಯಿತು.

ಅದರಂತೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗವಿಕಲರೊಬ್ಬರು ತಮ್ಮ ಗ್ರಾಮದ ಸಮಸ್ಯೆಗಳ ಪರಿಹಾರದ ಕುರಿತಾಗಿ ಮನವಿ ಸಲ್ಲಿಸಲು ಬೆಳಿಗ್ಗೆಯೇ ಅಗಮಿಸಿದರು ಆದರೆ ಅವರು ಗಂಟೆಗಟ್ಟಲೆ ಕಾದರೂ ಸಹಿತ ಸಿಎಂ ಮನವಿ ಸ್ವೀಕಾರ ಮಾಡಲಿಲ್ಲ. ಇದು ಜನರ ಅಸಮಾಧಾನಕ್ಕೆ ಕಾರಣವಾಯಿತು ಹಾಗೂ ಅಂಗವಿಕಲರಿಗೆ ಪ್ರತ್ಯಕವಾಗಿ ಸಿಎಂ ಅವರಿಗೆ ಅಹವಾಲು ಸಲ್ಲಿಸಲು ಪ್ರತ್ಯೇಕ ಕೌಂಟರ್ ನಿರ್ಮಿಸಲು ಒತ್ತಾಯಿಸಿದರು.

Tags: