ಅದೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಮುಖ ಯೋಜನೆ. ಯೋಜನೆಯ ಉದ್ದೇಶವೇ ಗ್ರಾಮೀಣ ಜನರ ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರು ತಲುಪಿಸುವುದು. ಆದರೆ ಈಗ ಇದೇ ಯೋಜನೆಯು ಜಿಲ್ಲೆಯ ಗ್ರಾಮಗಳಲ್ಲಿ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಇದರ ಬಗ್ಗೆ ಹಾಲಿ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತವಾರಿ ಸಚಿವರು ಗರಂ ಆಗಿದ್ದು, ಇಲಾಖೆಯ ಸಚಿವರಿಂದ ತನಿಖೆಗೆ ಮುಂದಾಗಿದ್ದಾರೆ. ಯಾವ ಜಿಲ್ಲೆಯ ಈ ಆರೋಪ ಅಂತೀರಾ ಇಲ್ಲಿದೆ ನೋಡಿ ಅದರ ವಿವರ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸು ದೇಶದ ಪ್ರತಿಯೊಂದು ಮನೆಗೆ ಶುದ್ದ ಕುಡಿಯುವ ನೀರನ್ನು ಒದಗಿಸಬೇಕು ಎಂದು ಜಲಜೀವನ್ ಮಿಷನ್ ಯೋಜನೆಯನ್ನ ಜಾರಿಗೆ ತಂದಿದ್ರು.. ಆದರೆ ಅದು ಜಿಲ್ಲೆಗಳಲ್ಲಿ ಅದು ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರ ಅಳಲಾಗಿದೆ… ಅಲ್ಲದೆ, ಎಲ್ಲಿ ನೋಡಿದರಲ್ಲಿ ಕಳಪೆ ಕಾಮಗಾರಿ, ನೀರಿನ ಕನೆಕ್ಷನ್ ಗಳಿಗೆ ನಳವಿಲ್ಲ, ಸರಿಯಾದ ಮಿಟರ್ ಇಲ್ಲ, ವಾಲ್ ಗಳಿಲ್ಲ, ಮಿಟರ್ ಮುಚ್ಚುವ ಟ್ಯಾಪಗಳು ಕೂಡಾ ಇಲ್ಲ, ಈಗಾಗಲೆ ಧಾರವಾಡ ಜಿಲ್ಲೆಯಲ್ಲಿ 1100 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿರುವ ನೀರಿನ ಯೋಜನೆಯ ಕಾಮಗಾರಿಗಳು ನಡೆದಿವೆ.. ಆದರೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ, ಆತ ಬಿಡಿ ಗುತ್ತಿಗೆದಾರರಿಗೆ ಕಾಮಗಾರಿಯನ್ನ ನೀಡಿ ಕಳಪೆ ಮಟ್ಟದ ಕಾಮಗಾರಿಗಳನ್ನಾಡಿಸುತ್ತಿದ್ದಾರೆ. ಅದರಂತೆ ಗ್ರಾಮಿಣ ಭಾಗದ ಸಿಸಿ ರಸ್ತೆಗಳನ್ನ ಎಲ್ಲೆಂದರಲ್ಲಿ ಅಗೆದು ಅವುಗಳನ್ನು ಮರಳಿ ರಸ್ತೆ ದುರಸ್ತಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಜನರು ಪರದಾಡುವಂತಾಗಿದೆ ಎಂದು ಈ ಯೋಜನೆಗೆ ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಶಾಸಕರೆ ನೇರವಾಗಿ ಗುತ್ತಿಗೆದಾರರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ
ಧಾರವಾಡ ಜಿಲ್ಲೆಯಲ್ಲಿ ಜೆಜೆಎಂ ವರ್ಕ ಕಳಪೆ ಕಾಮಗಾರಿ ಯಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ, ಸಚಿವ ಸಂತೋಷ್ ಲಾಡ್ ಗರಂ ಆಗಿದ್ದು, 1100 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಕಳಪೆಯಾಗಿದೆ ಮನೆಮನೆಗೆ ನೀರು ಕೊಡುವ ಕಾಮಗಾರಿ ಸಂಪೂರ್ಣವಾಗಿ ಪೇಲ್ಯೂವರ್ ಆಗಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ನಾನು ಗ್ರಾಮೀಣ ಕ್ಷೆತ್ರದಲ್ಲಿ ಮೂಲ ಗುತ್ತಿಗೆದಾರರನ್ನ ಸಭೆ ಕರೆಯುತ್ತೆನೆ. ನಾನು ಸಪರೇಟ್ ಆಗಿ ಮೂಲ ಗುತ್ತಿಗೆದಾರರ ಸಭೆ ಕರೆಯುತ್ತೇನೆ. ಜಿಲ್ಲೆಯಲ್ಲಿ ಗುತ್ತಿಗೆದಾರರು ಉತ್ತಮವಾದ ಕಾಮಗಾರಿ ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಎಲ್ಲ ಸಿ ಸಿ ರಸ್ತೆಗಳನ್ನ ಹಾಳು ಮಾಡಿದ್ದಾರೆ. ಸರಿಯಾಗಿ ರಸ್ಟೋರೆಶನ್ ಮಾಡ್ತಿಲ್ಲ. ಆರ್ ಡಿ ಪಿ ಆರ್ ಸಚಿವರಿಂದ ಜಿಲ್ಲೆಯ ಎಲ್ಲ ಜೆಜೆಎಂ ಕಾಮಗಾರಿಗಳನ್ನ ತನಿಖೆ ಮಾಡಿಸುತ್ತೆನೆ. ಧಾರವಾಡ ಜಿಲ್ಲೆಯ ಎಲ್ ಆ್ಯಂಡ ಡಿ ಕಂಪನಿ ಜೊತೆಗೆ ಜೆಜೆಎಂ ಬಗ್ಗೆ ತನಿಖೆ ಮಾಡಿಸುವುದಾಗಿ ಶಾಸಕ ವಿನಯ ಕುಲಕರ್ಣಿ ಅವರು ಕಿಡಿ ಕಾರಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾಮತೋಷ್ ಲಾಡ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕ್ಕೋಂಡಿದ್ದಾರೆ. ಇನ್ನು ಜೆಜೆಎಂ ನಲ್ಲಿ ಗ್ರಾಮೀಣ ಭಾಗದಲ್ಲಿ 60 ಕ್ಕೂ ಹೆಚ್ಚು ಬೋರವೆಲ್ ಗಳನ್ನ ಕೊರೆಸಲಾಗಿದೆ ಅವುಗಳಿಗೆ ವಿದ್ಯುತ್ ಕನೆಕ್ಷನ್ ನೀಡದೆ ಇರೋ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕ್ಕೊಂಡು, ಒಂದು ವಾರದಲ್ಲಿ ಜೆಜೆಎಂ ನಲ್ಲಿ ಹಾಕಿರುವ ಬೋರವೆಲ್ ಗಳಿಗೆ ವಿದ್ಯುತ್ ಕನೆಕ್ಷನ್ ಕೊಡಬೇಕು. ಬೋರವೆಲ್ ಕೊರೆಸಿ ವಿದ್ಯುತ್ ಕನೆಕ್ಷನ್ ಕೊಡದೆ ಇದ್ರೆ ಹೇಗೆ ಎಂದು ಖಡಕ್ ವಾರ್ನಿಂಗ್ ಮಾಡಿದರು. ಅಧಿಕಾರಿಗಳು ಗುತ್ತಿಗೆದಾರರ ಮಾಡುವ ದಿವ್ಯ ನಿರ್ಲಕ್ಷಕ್ಕೆ ಬೇಸರ ವ್ಯಕ್ತ ಪಡಿಸಿ, ಅಧಿಕಾರಿಗಳೆ ನಿಮಗೆ ನಾಚಿಕೆ ಇಲ್ವಾ, ಯಾಕೆ ಹೀಗೆ ದಿವ್ಯ ನಿರ್ಲಕ್ಷ್ಯ ಮಾಡ್ತಿರಾ..? ನೀವು ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಜನರು ನಮಗೆ ಬೈದೆ ಬೈಯ್ತಾರೆ ಇಡಿ ಜಿಲ್ಲೆಯಲ್ಲಿ ಕಳೆಪೆ ಕಾಮಗಾರಿ ಯಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ 1100 ಕೋಟಿ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ. ಯಾರ ಬೇಕಾದ್ರೂ ಎನ್ ಬೇಕಾದನ್ನ ಮಾಡೋ ಹಾಗೆ ಆಗಿದೆ..ಈ ಯೋಜನೆಯಲ್ಲಿ ಅಧಿಕಾರಿಗಳಿಂದ ಹಿಡಿದು ಗುತ್ತಿಗೆದಾರರು ಒಬ್ಬರ ಮೆಲೆ ಮತ್ತೊಬ್ಬರು ಹಾಕಿ ಕಾಮಗಾರಿಯನ್ನು ವಿಳಂಭದ ಜೊತೆಗೆ ಕಳಪೆ ಕಾಮಗಾರಿಯನ್ಮ ಮಾಡುತ್ತಿದ್ದಾರೆ..ಎಂದು ಶಾಸಕ ವಿನಯ ಕುಲಕರ್ಣಿ ಅವರು ಇಲಾಖೆಯ ಸಚಿವರಿಂದ ತನಿಖೆ ಮಾಡಿಸುತ್ತೆನೆ ಎಂದು ಹೇಳಿದ್ದಾರೆ..ಈ ಯೋಜನೆ ಸಕ್ಸ್ ಸ್ ಆಗಬೇಕು ಎಂದರೆ ಧಾರವಾಡ ಜಿಲ್ಲೆಯ ಜೆಜೆಎಂ ಕಾಮಗಾರಿಯನ್ನ ತನಿಖೆಗೆ ಕೊಡ್ತಾರಾ ಎಂಬುದನ್ನು ಈಗ ಕಾದು ನೋಡಬೇಕಿದೆ.
ಮಂಜುನಾಥ
ಇನ್ ನ್ಯೂಸ್ ಧಾರವಾಡ