Uncategorized

ಪೋಷಕರ ಸಾಲ ತೀರಿಸಲು ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

Share

ಪೋಷಕರು ಮಾಡಿದ್ದ ಸಾಲಕ್ಕೆ ಮಗನಿಗೆ ಕಿರುಕುಳ ನೀಡಿದ್ದರ ಹಿನ್ನಲೆಯಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಶ್ಯಾಪೇಟಿ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆ ನಿವಾಸಿ ಶಾರುಖ್ ಸೌದಾಗರ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿ ಸದ್ಯ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಶಾರುಖ್ ಸೌದಾಗರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಾರುಖ್ ಪೋಷಕರು ರುಬೀನಾ ಎಂಬ ಸ್ಥಳಿಯ ಮಹಿಳೆಯ ಬಳಿ ಸಾಲ ಪಡೆದಿದ್ದರು. ಶಾರುಖ್ ತಂದೆ ಮೆಹೆಬೂಬಸಾಬ್ ಸಾಲ ಮಾಡಿದ್ದರು. ಪೋಷಕರು ಸಾಲಮರು ಪಾವತಿ ಮಾಡದ ಕಾರಣ ಶಾರುಖ್ ಗೆ ರುಬೀನಾ ಕಿರುಕುಳ ನೀಡಿದ್ದಾರಂತೆ. ಸಾಲ ಮರುಪಾವತಿ ಮಾಡುವಂತೆ ಶಾರುಖ್ ಸೌದಾಗರ್ ಗೆ ರುಬೀನಾ ಕಿರುಕುಳ ನೀಡುತ್ತಿದ್ದರು ಎಂದು ಶಾರುಖ್ ಆರೋಪಿಸಿದ್ದಾನೆ. ಶಾರುಖ್ ನಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿರೋ ಎಪಿಎಂಸಿ ಪೊಲೀಸರು, ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Tags: