Uncategorized

ಗರ್ಲಗುಜಿ ರಸ್ತೆಯ ಮೇಲೆ ಕ್ವಾಲೀಸ್ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಬೇಕವಾಡ ಗ್ರಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವು

Share

ಖಾನಾಪೂರ ಗರ್ಲಗುಜಿ ರಸ್ತೆಯಲ್ಲಿ ಕ್ವಾಲೀಸ್ ಕಾರು ಮತ್ತು ದ್ವಿಚಕ್ರ ವಾಹನ ಮುಖಾಮುಖಿಯಾಗಿ ಅಪಘಾತ ಸಂಭವಿಸಿ ಖಾನಾಪೂರ ತಾಲೂಕಿನ ಬೇಕವಾಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದೆನ್ನೆಂದರೆ ಬೇಕವಾಡದ ರಾಮಲಿಂಗ (ಅಪ್ಪಿ) ಪಾಂಡುರಂಗ ಮುತಗೇಕರ (20) ಮತ್ತು ಹನುಮಂತ ಮಹಾಬಲೇಶ್ವರ ಪಾಟೀಲ್ (20) ಅವರು ಪ್ರತಿದಿನವೂ ದ್ವಿಚಕ್ರವಾಹನದ ಮೇಲೆ ನಂದಿಹಳ್ಳಿಯ ಖಾಸಗಿ ಸೈನಿಕ ತರಬೇತಿ ಕೇಂದ್ರಕ್ಕೆ ತರಬೇತಿ ಪಡೆಯಲು ಹೋಗುತ್ತಿದ್ದರು ಇವತ್ತು ಕೂಡಾ ಅವರು ಎಂದಿನಂತೆಯೇ ನಂದಿಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಣ್ಣ ಹೊಸೂರು ಗ್ರಾಮದ ಬಳಿ ಕ್ವಾಲೀಸ್ ಕಾರು ಮುಂದೆ ಬಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಇಬ್ಬರೂ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಖಾನಾಪೂರ ಪೋಲಿಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಖಾನಾಪೂರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.ಬೇಕವಾಡ ಗ್ರಾಮದಲ್ಲಿ ಇದೇ ಫೇ 28 ರಂದು ಶ್ರೀ ಮಹಾಲಕ್ಷ್ಮಿ ಜಾತ್ರೆ ನಡೆಯಲಿದ್ದು ಜಾತ್ರೆಯ ಮೊದಲು ಈ ಘಟನೆ ಸಂಭವಿಸಿದ್ದರಿಂದ ಸಂಪೂರ್ಣ ಬೇಕವಾಡ ಗ್ರಾಮದಲ್ಲಿ ದುಃಖದ ಛಾಯೆ ಮೂಡಿಸಿದೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: