Uncategorized

ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ

Share

ರಾಜಸ್ಥಾನ , ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರ ಗದ್ದುಗೆ ಏರಿದ ಹಿನ್ನೆಲೆಯಲ್ಲಿ ಬೆಳಗಾವಿಯ ಚನ್ನಮ್ಮಾ ವೃತ್ತದಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ,ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಕಾರ್ಯಕರ್ತರು ಸಿಹಿ ಹಂಚಿ ಗುಲಾಲ್ ಎರಚಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅನಿಲ ಬೆನಕೆ ಮಾತನಾಡುತ್ತಾ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಪಕ್ಷದ ನಾವೆಲ್ಲ ಸೇರಿ ವಿಜಯೋತ್ಸವ ಆಚರಣೆ ಮಾಡುತ್ತಿರುವುದು ಸುವರ್ಣ ಅಕ್ಷರಗಳಲ್ಲಿ ಬರೆದು ಇಡಬೇಕು ಕಾರಣ ರಾಜಸ್ಥಾನ,ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ಕಮಲ ಅರಳಿದೆ ಮೋದಿ ಅವರ ನೇತೃತ್ವದಲ್ಲಿ ಐತಿಹಾಸಿಕ ಗೆಲುವನ್ನ ಸಾಧಿಸಿದೆ ಈ ಗೆಲುವು ಮೋದಿ ಅವರಿಗೆ ಸಲ್ಲುತ್ತದೆ ಅಮಿತಾ ಷಾ ಅವರು , ಬಿ ಎಲ್ ಸಂತೋಷ ಸೇರಿದಂತೆ ಹಲವು ನಾಯಕರು ನಮಗೆ ಮಾರ್ಗದರ್ಶನ ಮಾಡಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಶ್ರಮಿಸಿದ್ದಾರೆ .


ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಶತಸಿದ್ಧ ,ಜನರು ಮೋದಿ ಅವರ ಜೊತೆಗಿದ್ದಾರೆ. ಕಾಂಗ್ರೆಸ ಪಕ್ಷ ಇವತ್ತು ಧೂಳಿಪಟವಾಗಿದೆ ಎಲ್ಲಾ ಪಕ್ಷದ ಮುಖಂಡರಿಗೆ ಅಭಿನಂದನೆಗಳು ಅದೇ ರೀತಿ ನಮ್ಮ ಭಾಗದ ಶಾಸಕ ಅಭಯ ಪಾಟೀಲ ಅವರು ೪೨ ದಿನಗಳ ಕಾಲ ತೆಲಂಗಾಣ ಹಾಗು ಛತ್ತಿಸಗಡದಲ್ಲಿ ಪ್ರವಾಸ ಮಾಡಿ ಮೋದಿ ಅವರ ಕೈ ಬಲ ಪಡಿಸಲು ಪ್ರಯತ್ನ ಮಾಡಿದ್ದಾರೆ ೩ ರಾಜ್ಯಗಳಲ್ಲಿ ನಮ್ಮ ಪಕ್ಷ ಅದಿಕಾರದ ಚುಕ್ಕಾಣೆ ಹಿಡಿದಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು .

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ,ರವಿ ಪಾಟೀಲ ,ಮುರಗೇಂದ್ರಗೌಡಾ ಪಾಟೀಲ ,ಮಹಾಂತೇಶ ವಕ್ಕುಂದ ಸೇರಿದಂತೆ ಹಲವು ಬಿಜೆಪಿ ಪಕ್ಷದ ಮುಖಂಡರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು

Tags: