Uncategorized

ಬೆಳಗಾವಿಯಲ್ಲಿ ಜರುಗಿದ ಅಂಬಿಗರ ಚೌಡಯ್ಯ ಜಯಂತಿಗೆ ಚಾಲನೆ ಕೊಟ್ಟ ಜಿಲ್ಲಾಧಿಕಾರಿ ನಿತೇಶ ಪಾಟೀಲ

Share

ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಸಂಘ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತಿ ಉತ್ಸವ ಬ್ರಹತ್ ಜನಜಾಗೃತಿ ಸ್ವಾಭಿಮಾನಿ ಸಮಾವೇಶದ ಮೆರವಣಿಗೆಯನ್ನು ಕೋಟೆ ಕೆರೆ ಹತ್ತಿರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ಕೊಟ್ಟರು


ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ್ ಕುರದಂದವಾಡೆ ಮುಂದಾಳತ್ವದಲ್ಲಿ ನಡೆಯುತ್ತಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತಿ ಉತ್ಸವ ಬ್ರಹತ್ ಜನಜಾಗೃತಿ ಸ್ವಾಭಿಮಾನಿ ಸಮಾವೇಶದಲ್ಲಿ ಆನೆ ,ಕುದುರೆ ,ವಿವಿಧ ಕಲಾತಂಡಗಳು ,ಚಂಡವಾದಕರು ,ಗೊಂಬೆಕುಣಿತಗಳು ಮಹಿಳೆಯರು ಕುಂಭಹೊತ್ತು ಮೆರವಣಿಗೆಗೆ ಮೆರಗನ್ನು ತಂದವು ಕೋಟೆ ಕೆರೆ ಹತ್ತಿರ ಆರಂಭವಾದ ಮೆರವಣಿಗೆ ಚನ್ನಮ್ಮ ವೃತ್ತದ ಮಾರ್ಗವಾಗಿ ಅದ್ದೂರಿಯಿಂದ ಜರುಗಿ ಸರ್ದಾರ ಮೈದಾನದಲ್ಲಿ ಕೊನೆಗೊಂಡಿತು .
ಮೆರವಣಿಗೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸಾಯಿಬಣ್ಣ ತಳವಾರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ,ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ್ ಕುರದಂದವಾಡೆ ,ಅಪ್ಪಾಸಾಹೇಬ ಪೂಜಾರಿ, ಮಧುಶ್ರೀ ಪೂಜಾರ, ಜಿಲ್ಲಾ ಕೋಳಿ ಬೆಸ್ತ ಸಮಾಜದ ಮುಖಂಡರು ಮಹಿಳೆಯರು ಭಾಗಿಯಾಗಿದ್ದರು

Tags: