Uncategorized

ಹಾನಗಲ್’ನಲ್ಲಿ ನಡೆದ ನೈತಿಕ ಪೋಲಿಸ್’ಗಿರಿ ಪ್ರಕರಣ ಎಸ್.ಐ.ಟಿ. ಗೆ ನೀಡಬೇಕು : ಮಾಜಿ ಸಿಎಂ ಬೊಮ್ಮಾಯಿ

Share

ಹಾನಗಲ್’ನಲ್ಲಿ ನಡೆದ ನೈತಿಕ ಪೋಲಿಸ್’ಗಿರಿ ಪ್ರಕರಣವನ್ನು ಸ್ಥಳೀಯ ಪೊಲೀಸರು ಮುಚ್ಚಿಹಾಕಲು ಯತ್ನಿಸಿದ ಪ್ರಯತ್ನ ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಲಿಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು, ಆಮಿಷ ತೋರಿಸಿ ದೂರು ಹಿಂದೆ ಪಡೆಯಿರಿ ಎಂಬುದು ಬಹಿರಂಗವಾಗಿದೆ. ಅದಕ್ಕೆ ನಾನು ತನಿಖೆಯನ್ನು ಸ್ಥಳೀಯ ಪೋಲಿಸರಿಂದ ಬೇಡಾ, ಎಸ್.ಐ.ಟಿ ಅವರಿಂದ ತನಿಖೆ ಮಾಡಿಸಲು ನಾನು ಒತ್ತಾಯಿಸಿದ್ದೇನೆ. ಅದರಂತೆ ಸಿಎಂ ಹಾವೇರಿಗೆ ಬಂದಾಗ ಪ್ರಕರಣದ ತನಿಖೆಯನ್ನು ಎಸ್’ಐಟಿ ನಡೆಸಲು ಘೋಷಣೆ ಮಾಡುವ ಭರವಸೆ ಇಟ್ಟುಕೊಂಡಿದ್ದೇನೆ ಪ್ರಕರಣದ ಸಂತ್ರಸ್ತರನ್ನು ಬಿಜೆಪಿ ಭೇಟಿ ಮಾಡುತ್ತದೆ ಎಂದು ಅವರನ್ನು ಪೋಲಿಸರು ತನಿಖೆಯ ನೆಪದಲ್ಲಿ ಹಾನಗಲ್’ದಿಂದ ಶಿರಸಿಗೆ ಸ್ಥಳಾಂತರ ಮಾಡಿದ್ದಾರೆ. ಇಂತಹ ರಾಜಕೀಯ ನಡೆಯುತ್ತದೆ. ಹೀಗಾಗಿ ಅವರಿಂದ ಬಹಳ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.

ನಾಳೆ ಹಾವೇರಿಯಲ್ಲಿ ಹಲವಾರು ಕಾರ್ಯಕ್ರಮಗಳಿವೆ, ಅದರಂತೆ ನಮ್ಮ ಕಾರ್ಯಕ್ರಮಕ್ಕೆ ನಾವು ಹೋಗತ್ತಾ ಇದ್ದೇವೆ, ಸಿಎಂ ಸಿದ್ದರಾಮಯ್ಯ ಅವರು ಅವರ ಕಾರ್ಯಕ್ರಮಕ್ಕೆ ಅವರು ಬರತ್ತಾ ಇದ್ದಾರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡಾ ಮುಂದುವರೆದು ಮಾತನಾಡಿದ ಅವರು ಸಿದ್ದರಾಮಯ್ಯ ಅಯೋಧ್ಯೆ ಭೇಟಿ ವಿಷಯವಾಗಿ ಮಾತನಾಡಿ, ಅವರಿಗೆ ಅಯೋಧ್ಯೆಗೆ ಹೋಗಬೇಕೆಂದು ಒಳಮನಸ್ಸು ಹೇಳುತ್ತದೆ, ಆದರೆ ಪಕ್ಷದ ವರಿಷ್ಠರು ಬೇಡಾ ಎಂದಿರಬಹುದು ಅದಕ್ಕಾಗಿ ಅವರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು

Tags: