Uncategorized

ಶ್ರೀರಾಮ ಘೋಷನೆಗೆ ಇತಿಹಾಸವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಮಹೇಂದ್ರ ತಮ್ಮಣ್ಣವರ

Share

ಶ್ರೀರಾಮ ಘೋಷನೆಗೆ ಇತಿಹಾಸವಿಲ್ಲ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ

ಅಳಗವಾಡಿ ಗ್ರಾಮದ ದಿಗಂಬರಶ್ವೇರ ಮಠದ ಆವರಣದಲ್ಲಿ ಶುಕ್ರವಾರ ನಡೆದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ರಾಯಣ್ಣ ಗಲ್ಲೆಗೆರುವಾಗ ಹರ ಹರ ಮಹಾದೇವೆ ಎಂದು ಹೇಳಿದ್ದರು. ಆದರೆ ಇಂದು ಬಿಜೆಪಿಯವರು ಜೈ ಶ್ರೀರಾಮ ಎನ್ನುತ್ತಾ ಧರ್ಮ-ಧರ್ಮಗಳ ಮಧ್ಯ ವಿಷಬೀಜ ಬಿತ್ತುತ್ತಿದ್ದಾರೆ. ಜೈ ಶ್ರೀರಾಮ ಘೋಷನೆಗೆ ಇತಿಹಾಸವಿಲ್ಲ ಹರ ಹರ ಮಾಹಾದೇವ ಗೋಷನೆಗೆ ಇತಿಹಾಸವಿದೆ ಎಂದ ಅವರು ಜೈ ಶ್ರೀರಾಮ ಅಂದವರು ಮಾತ್ರ ಹಿಂದೂಗಳಾ ನಾವು ಹಿಂದೂಗಳಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ
ಹರ ಹರ ಮಹಾದೇವ ಮಾತ್ರ ಹೇಳಿ ಜೈ ಶ್ರೀರಾಮ ಎಂದು ಮಾತ್ರ ಯಾವತ್ತೂ ಹೇಳಿಬೇಡಿ ಎಂದು ಹೇಳಿದ ಅವರು ಬಿ.ಜಿ.ಪಿ ಯವರಿಗೆ ಜೈ ರಾಮ ಘೋಷನೆ ಬಿಟ್ಟು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳಲಿ ಎಂದು ಸವಾಲ ಹಾಕಿದ್ದಾರೆ .


ಈ ಸಂದರ್ಭದಲ್ಲಿ ಹುಲಜಂತಿಯ ಶ್ರೀ ಮಾಳಿಂಗೇಶ್ವರ ಮಹಾರಾಜರು , ಜಕನೂರಿನ ಮಾದನಮದಗೋಂಡೆಶ್ವರ ಸಿದ್ದಾಶ್ರಮದ ಡಾ. ಮಾದುಲಿಂಗ ಮಹಾರಾಜರು ,ಕುಡಚಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಧೀಪ್ ಹಾಲ್ಗೂಣಿ, ಮಾಜಿ ಜಿ.ಪಂ ಸದಸ್ಯ ಮಹಾದೇವ ಶಿರಗೂರೆ, ಶಿವಾನಂದ ಬನಶಂಕರಿ, ಮಲಕಾರಿ ಸಪ್ತಸಾಗರೆ, ಮಾರುತಿ ಬನಶಂಕರಿ, ಮುತ್ತಪ್ಪ ಡಾಂಗೆ ಭರತೇಶ ಸಿಂಗಾಡಿ, ಗೋಪಾಲ ಹಂಜೆ ಕರೇಪ್ಪ ಲಠ್ಠೆ ಮಹೇಶ ಗಡ್ಡೆ ಮುಂತಾದವರು ಇದ್ದರು

Tags: