ಕಡಲೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖ ವಾಣಿಜ್ಯ ಹಿಂಗಾರಿ ಬೆಳೆಯಾಗಿದೆ. ಈಗ ಉತ್ತಮ ಮಳೆಯಾಗುತ್ತಿದ್ದು, ರೈತಾಪಿ ವರ್ಗ ಬಿತ್ತನೆಕಾರ್ಯ ಚುರುಕುಗೊಳಿಸಿದ್ದಾನೆ. ಆದ್ರೆ ಸದ್ಯ ಕಡೆಲೆ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗುತ್ತಿದೆ. ಸರ್ಕಾರದ ವಿತರಿಸುವ ಕಡಲೆ ಬೀಜದ ದರ ದುಬಾರಿಯಾಗಿದ್ದು, ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿದ್ದಾನೆ.
ಮಳೆ ಅಭಾವದಿಂದ ಮುಂಗಾರು ಬೆಳೆ ಕೈಕೊಟ್ಟಿತ್ತು. ಈಗ ಹಿಂಗಾರಿ ಬೆಳೆಯಾದ ಕಡಲೆಯನ್ನು ಸಣ್ಣ ಹಾಗೂ ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 2.3 ಲಕ್ಷ ಹೆಕ್ಟರ್ ಪ್ರದೇಶ ಕಡಲೆ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಅಲ್ಲಸ್ವಲ್ಪ ಮಳೆ ಆಗಮನದಿಂದ ಮುಂಜಾಗ್ರತವಾಗಿ ರೈತರು ಕಡೆಲೆ ಖರೀದಿಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರ ಹಾಗೂ 12 ಹೆಚ್ಚುವರಿ ಮಾರಾಟ ಕೇಂದ್ರಗಳ ಸೇರಿ 26 ಕೇಂದ್ರಗಳಲ್ಲಿ ಬೀಜ ಸಬ್ಸಿಡಿ ಯಲ್ಲಿ ವಿತರಿಸಲಾಗುತ್ತಿದೆ. ರೈತರಿಗೆ ಕೊರತೆಯಾಗದಂತೆ ಕ್ರಮವಹಿಸಿದ್ದು, ಬೀಜ ಗುದಾಮಿನಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಕಾರಿಗಳು ತಿಳಿಸಿದ್ದಾರೆ.
ಸರ್ಕಾರದಿಂದ ವಿತರಿಸುವ ಬಿತ್ತನೆ ಬೀಜದ ದರ ಕಳೆದ ವರ್ಷ ಕೆ.ಜಿ.ಗೆ 70 ರೂ.ಗೆ ನೀಡಲಾಗಿತ್ತು. ಅಂದರೆ ಪ್ರತಿ ಕ್ವಿಂಟಲ್ಗೆ ಕಡಲೆ ಬೀಜ 7ಸಾವಿರವಿದ್ದು, ಸಬ್ಸಿಡಿಯಾಗಿ 5ಸಾವಿರಕ್ಕೆ ದೊರೆತ್ತಿತ್ತು. ಈ ಬಾರಿ ಪ್ರತಿ ಕೆ.ಜಿ.ಗೆ 85ರೂ. ನಿಗದಿಪಡಿಸಲಾಗಿದೆ. ಕ್ವಿಂಟಲ್ ಬಿತ್ತನೆ ಕಡಲೆ ಬೀಜದ ದರ 8500 ಆಗುತ್ತದೆ. 2500 ರೂ ಸಬ್ಸಿಡಿಯಾಗಿ 6000 ರೂ. ಕ್ವಿಂಟಲ್ ಬೀಜ ನೀಡಲಾಗುತ್ತಿದೆ.
ಕಳೆದ ವರ್ಷ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ 20 ಕೆ.ಜಿ. ಪಾಕೇಟ್ಗೆ 900ರೂ. ನೀಡಿ ಖರೀದಿಸಲಾಗಿತ್ತು. ಈ ಬಾರಿ 1200 ರೂ. ಸರ್ಕಾರ ದರ ನಿಗದಿಪಡಿಸಿದೆ. 300 ರೂ. ಹೆಚ್ಚಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ರೈತ ಮುಖಂಡ ಗುರುರಾಯನಗೌಡರ ಹಾಗೂ
ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದರ ಕಡಿಮೆಗೊಳಿಸಲು ರೈತರ ಒತ್ತಾಯ..
ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ಮುಂಗಾರ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಈಗ ಮಳೆಯಾದರೆ ಹಿಂಗಾರ ಬೆಳೆ ತೆಗೆಯಬಹುದು ಎಂಬ ಭರವಸೆಯಲ್ಲಿದ್ದು, ಬಿತ್ತನೆ ತಯಾರಿ ನಡೆಸಿದ್ದಾರೆ. ಆದರೆ ಬೀಜದ ದರ ಸರ್ಕಾರ ಹೆಚ್ಚಿಸಿದ್ದು, ರೈತರನ್ನು ಇದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಆದರಿಂದ ಸರ್ಕಾರ ತಕ್ಷಣ ಕಡಲೆ ಬಿತ್ತನೆ ಬೀಜದ ದರ ಕಡಿಮೆಗೊಳಿಸಬೇಕು. ಇಲ್ಲವಾದ್ರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆದ್ರೆ ಬೆಲೆ ಏರಿಕೆಯನ್ನು ಧಾರವಾಡ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಕಿರಣಕುಮಾರ ಎಂ ಸಮರ್ಥಿಸಿಕೊಂಡಿದ್ದಾರೆ. ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಅವರು,
ಮಾರುಕಟ್ಟೆಯಲ್ಲಿ ಕಡಲೆ ದರ ಹೆಚ್ಚಾಗಿದ್ದರಿಂದ ಬಿತ್ತನೆ ಬೀಜದ ಬೆಲೆಯೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಕಡಲೆ ಬೀಜ ಖರೀದಿಸಿ, ಪರಿಷ್ಕರಿಸುವ ಮೂಲಕ ಬಿತ್ತನೆಗೆ ಸೂಕ್ತವೋ ಇಲ್ಲ ಎಂಬ ಪರೀಕ್ಷೆ ನಡೆಸಿ ತಯಾರಿಸಲಾಗುತ್ತದೆ. ಆದರಿಂದ ಮಾರುಕಟ್ಟೆಗಿಂತ ರೈತ ಸಂಕರ್ಪ ಕೇಂದ್ರದಲ್ಲಿ ಬಿತ್ತನೆ ಬೀಜ ದರ ಸ್ವಲ್ಪ ಹೆಚ್ಚಿರುತ್ತದೆ. ಸಾಮಾನ್ಯ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಬಿತ್ತನೆ ಬೀಜದ ದರ ಸರ್ಕಾರ ಮಟ್ಟದಲ್ಲಿ ನಿಗದಿಪಡಿಸಲಾಗಿರುತ್ತದೆ. ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೆ ಇಲ್ಲಿಯೂ ಸಹ ದರ ಕಡಿಮೆ ಮಾಡುವ ಅವಕಾಶವಿರುತ್ತದೆ ಎನ್ನುತ್ತಾರೆ.